ಬಾಲಗಂಗಾಧರ ತಿಲಕ್ ಅವರು, ಬ್ರಿಟಿಷರ ವಿರುದ್ಧ ದೇಶದ ಜನರನ್ನು ಒಂದುಗೂಡಿಸಲು, ಸಾರ್ವಜನಿಕ ಗಣೇಶೋತ್ಸವದ ಪರಿಕಲ್ಪನೆಯನ್ನು ಮೂಡಿಸಿದರು. ಅಂದಿನಿಂದ ಎಲ್ಲೆಡೆ ಸೌಹಾರ್ದತೆಯಿಂದ ಮತ್ತು ಒಗ್ಗಟ್ಟಿನಿಂದ ಗಣೇಶೋತ್ಸವವನ್ನು ಆಚರಿಸುತ್ತಾರೆ.
ಗಣೇಶನನ್ನು ಗಣಪತಿ, ಗೌರಿಪುತ್ರ, ಏಕದOತ, ಗಜಾನನ, ವಿನಾಯಕ, ಲಂಬೋದರ, ಸ್ಕಂದಾಗ್ರಜ, ಗಣಾಧ್ಯಕ್ಷ ಹೀಗೆ ನೂರಾಎಂಟು ಹೆಸರುಗಳಿಂದ ಪೂಜಿಸುತ್ತಾರೆ. ಸಂಕಟ ನಿವಾರಣೆಗಾಗಿ ಗಣೇಶನನ್ನು ನೆನೆದರೆ, ಎಲ್ಲವೂ ಪರಿಹಾರವಾಗುತ್ತದೆ ಎಂಬುದು ಜನರ ನಂಬಿಕೆ.
ಪ್ರತಿಯೊಂದು ಶುಭಕಾರ್ಯಕ್ಕೆ ಗಣೇಶನ ಆವಾಹನೆ, ಪ್ರತಿಷ್ಠಾಪನೆ ಮತ್ತು ಪೂಜೆಗೆ ಪ್ರಥಮ ಆದ್ಯತೆ. ಮಹಾಭಾರತದ ಕಾಲದಿಂದಲೂ ಗಣೇಶ ಚತುರ್ಥಿ ಆಚರಣೆಯಲ್ಲಿತ್ತು ಎಂಬುದಕ್ಕೆ ಪೌರಾಣಿಕ ಆಧಾರಗಳಿವೆ. ಸ್ವಯಂ ಶ್ರೀ ಕೃಷ್ಣನೇ ಗಣೇಶನನ್ನು ಪೂಜಿಸಿದ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಾಗಿದೆ. ಗಣೇಶನ ಪುಣ್ಯ ಸ್ಮರಣೆಯು ಜೀವನದ ಮಾರ್ಗವನ್ನು ಸುಗಮಗೊಳಿಸುತ್ತದೆ.
L
ವಕ್ರತುಂಡಾಯ ನಾಗಯಜ್ನೋಪವಿತಾಯ ಚತುರ್ಭುಜಾಯ / ಮೋದಕ ರೂಪಾಯ ಸಿದ್ಧಿವಿಜ್ಞಾನ ರೂಪಿಣೆ ಫಲದಾ ಮಂಗಲಂ //
ಏಕ ದಂತಾಯ ವಿದ್ಮಹೇ, ವಕ್ರ
ತುಂಡಾಯ
ಧೀಮಹೇ, ತನ್ನೋ ದಂತಿ:
ಪ್ರಚೋದಯಾತ್..
ವಕ್ರತುಂಡ ಮಹಾ ಕಾಯ
ಕೋಟಿ ಸೂರ್ಯ ಸಮಪ್ರಭ,
ನಿರ್ವಿಘನಂ ಕುರುಮೇ ದೇವ
ಸರ್ವ ಕಾರ್ಯೇಶು ಸರ್ವದ..
ಆ ಗಜಾನನ ಪದ್ಮಾರ್ಕ್O
ಗಜಾನನ ಮಹರ್ನಿಶO, ಅನೇಕ
ದಂತO ಭಕ್ತಾನಾO ಏಕ ದಂತO
ಉಪಸ್ಮಾಹೆ...
ಗಣಪತಿಯ ಸ್ತೋತ್ರದೊಂದಿಗೆ ನಾಳೆ ಅನಂತ ಚತುರ್ದಶಿಯಂದು ಗಣೇಶನನ್ನು ಮತ್ತೆ ಮುಂದಿನ ವರ್ಷ ಬೇಗ ಬಾ .. ಎಂದು ಹೇಳಿ ಬೀಳ್ಕೊಡೋಣ.
ಸುಶಿ